
ಶಿವಮೊಗ್ಗ; ಇಂದು ಮೊದಲನೇ ಹಂತದ ಗ್ರಾಮ ಪಂಚಾಯತಿ ಸಾರ್ವತ್ರಿಕ ಚುನಾವಣೆ-2020 ನಡೆಯುತ್ತಿರುವ ಹಿನ್ನೆಲೆಯಲ್ಲಿ ಮತದಾನ ಮುಗಿದ ನಂತರ, ಮತಪೆಟ್ಟಿಗೆ ಸಂಗ್ರಹಿಸಿಡುವ ಕೊಠಡಿಯ ಕೇಂದ್ರಗಳಿಗೆ ಕೆ. ಎಂ ಶಾಂತರಾಜು, ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು ಶಿವಮೊಗ್ಗದ ಹೆಚ್.ಎಸ್. ರುದ್ರಪ್ಪ ರಾಷ್ಟ್ರೀಯ ಪದವಿ ಪೂರ್ವ ಕಾಲೇಜು ಮತ್ತು ಭದ್ರಾವತಿಯ ಸಂಚಿಯ ಹೊನ್ನಮ್ಮ ಬಾಲಕಿಯರ ಪದವಿ ಪೂರ್ವ ಕಾಲೇಜುಗಳಲ್ಲಿ ಸ್ಥಾಪಿಸಿರುವ ಸ್ಟ್ರಾಂಗ್ ರೂಂ ಗಳಿಗೆ ಭೇಟಿ ನೀಡಿ, ಅಲ್ಲಿನ ಭದ್ರತಾ ವ್ಯವಸ್ಥೆಯ ಬಗ್ಗೆ ಪರಿಶಿಲನೆ ನಡೆಸಿದರು.

ಈ ಸಂದರ್ಭದಲ್ಲಿ ಎ.ಸಿ ಶಿವಮೊಗ್ಗ, ತಹಸಿಲ್ದಾರ್ ಶಿವಮೊಗ್ಗ, ತಹಸಿಲ್ದಾರ್ ಭದ್ರಾವತಿ, ಡಿವೈಎಸ್.ಪಿ ಭದ್ರಾವತಿ, ಸಿಪಿಐ ಭದ್ರಾವತಿ ಟೌನ್ ರವರು ಹಾಜರಿದ್ದರು.
C News TV Kannada News Online in cnewstv